ಪರೀಕ್ಷೆಯಲ್ಲಿ ಜಯಗಳಿಸಿ, ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳಲು ವಿದ್ಯಾರ್ಥಿಗಳು ಓದಲೇಬೇಕಿರುವ ಪ್ರೇರಣೆಯ ಸೂತ್ರ

ಪ್ರೇರಣೆಯ ಕವನ

ಪರೀಕ್ಷೆ ಎಂದೊಡನೆ ಮನವೇಕೋ 

 ಪಂಜರದೊಳಗಿನ ಪಾರಿವಾಳವಾಯಿತು.

 ದುಗುಡ ದಿಗಿಲುಗಳ ಆರ್ಭಟ 

 ಎದೆಯಾಳದಲ್ಲಿ ಸುನಾಮಿಯ ಸೃಷ್ಟಿಸಿತು|

  ಪರೀಕ್ಷೆ ಎಂದೊಡನೆ ಮಗುವಿನಂತಿದ್ದ ಮೆದುಳು 

  ನೆರೆತ ನಾಯಕನಂತಾಯಿತು 

  ಸಂಕೋಚ ನಾಚಿಕೆ ಭಯದ ಕಾರ್ಗತ್ತಲು 

  ದಟ್ಟ ಕಾನನವ ಆವರಿಸಿದಂತಾಯಿತು ||

  ಪರೀಕ್ಷೆ ಎಂದೊಡನೆ ಮೈಯೆಲ್ಲ

  ರೋಮಾಂಚನವಾಗಿ ಕಂಪನ ಉಂಟಾಯಿತು. 

  ಆ ಕಂಪನದ ಕಾಳ್ಗಿಚ್ಚು ದೇಹವನ್ನೆಲ್ಲಾ ಹಬ್ಬಿ 

  ಕಾಯ ಕಾದು ರೋಗದ ಗೂಡಾಯಿತು|||

     ಪರೀಕ್ಷೆ ಎಂದೊಡನೆ ಕೆಲವರಿಗೆ ಉತ್ಸಾಹ, 

     ಕೆಲವರಿಗೆ ಸಂಭ್ರಮ, ಕೆಲವರಿಗೆ ಸಂಕಟದ ಬೇನೆ.

     ಅಕ್ಷರ ಜ್ಞಾನದ ಅಳತೆಗೋಲಿದು

     ಜೀವನದಂತ್ಯವಲ್ಲವೆನ್ನುವುದ ಅರಿಯಿರಿ||||

ಪರೀಕ್ಷೆಗಳು ಬರಬೇಕು. ನಿರೀಕ್ಷೆಗಳು ಇರಬೇಕು 

ಭವಿಷ್ಯತ್ತಿನ ಸಮೀಕ್ಷೆಗಳು ನಡೆಯಬೇಕು.

ಪರೀಕ್ಷಾ ಉಪೇಕ್ಷೆಗಳು ಇಲ್ಲವಾಗಿ 

ವಿದ್ಯಾರ್ಥಿಗಳು ಜ್ಞಾನ ಪಡೆದು ಸುಶಿಕ್ಷಿಗಳಾಗಬೇಕು|||||

        ನವಯುಗದ ನವನಾಂದಿಗೆ ನವಚೇತನದ 

        ನವಯುವಕರ ನವಶಕ್ತಿಯ ನವನಿರ್ಧಾರಗಳು 

        ನವನವೀನ ನಾಡಿನ ನವಭರವಸೆಗಳಾಗಬೇಕು. 

        ನವ ಬಾಳಿನ ನವ ಹೆಜ್ಜೆಗೆ ನವೀನ ಪರೀಕ್ಷೆಗಳು ಎದುರಾಗಬೇಕು

        ನವೋಲ್ಲಾಸದಿ ಜಗವೆಲ್ಲ ನವೀನ ಜ್ಞಾನದ ಚಿಲುಮೆಯಾಗಿ

        ನಗುಮುಖದ ಜನರೆಲ್ಲ ನವನಾಡಿನ ಬೆಳಕಾಗಬೇಕು||||||

ಪರೀಕ್ಷಾ ಯಶಸ್ಸಿನ ಬಯಕೆಯಲ್ಲಿರುವವರ 

ಆಕಾಂಕ್ಷೆಗಳು ಆಕಾಶದೆತ್ತರಕ್ಕಿರಬೇಕು. 

ನೀತಿಗಳು ನಿಯತಿಯನ್ನು ಮೀರುವಂತಿರಬೇಕು 

ಕನಸುಗಳು ಕಾರ್ಮೋಡವನ್ನು ಸೀಳಿ ನುಗ್ಗುವ ಸೂರ್ಯನ ಕಿರಣಗಳಂತಿರಬೇಕು 

ಭರವಸೆಗಳು 

ಕಲಿಕೆಯ ಕಾಲುವೆ ಸಾಗರವಾಗುವಂತಿರಬೇಕು

ರಚನೆ : ನಾಗರಾಜ ವಾಲಿಕಾರ

Leave a Reply

Your email address will not be published. Required fields are marked *